ರಪ್ಪಲ್ಲಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಕಾಯಕಲ್ಪ: ಗ್ರಾಮಸ್ಥರ ಒಗ್ಗೂಡಿದ ಪ್ರಯತ್ನ…!

1 min read
Share it

 

ಚಿಕ್ಕಬಳ್ಳಾಪುರ : ತಾಲೂಕಿನ ಮಂಡಿಕಲ್ ಹೋಬಳಿಯ ಕಮ್ಮುಗುಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ರಪ್ಪರಲಹಳ್ಳಿಯಲ್ಲಿ ನೆಲೆಸಿರುವ ಈ ಆಂಜನೇಯ ಸ್ವಾಮಿ ದೇವಾಲಯವು ನಾಲ್ಕು ಶತಮಾನಗಳಷ್ಟು ಹಳೆಯದದ್ದು. ವಿಜಯನಗರ ಕಾಲದ ಪಾಳೆಗಾರರು ಈ ದೇವರನ್ನು ತಂದಾಗ, ಈ ಸ್ಥಳದಲ್ಲಿ ಅವರ ಕೈಯಿಂದ ಇಳಿಸಲಾಯಿತು ಎಂಬ ಇತಿಹಾಸವಿದೆ. ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಇಲ್ಲಿ  ಪ್ರತಿಷ್ಠಾಪನೆ  ಮಾಡಿದರು ಎಂದು ಹೇಳಲಾಗುತ್ತದೆ. ಅಂದಿನಿಂದಲೂ ಒಂದು ಸಣ್ಣ ಗುಡಿಯಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು.

ಈ ದೇವಾಲಯದ ಪಕ್ಕದಲ್ಲಿರುವ ಹುತ್ತ ಮತ್ತು ಅದರಲ್ಲಿರುವ ನಾಗರಹಾವು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ. ಈ ನಾಗರಹಾವನ್ನು ಆಂಜನೇಯ ಸ್ವಾಮಿಯ ಬಲವೆಂದು ನಂಬಲಾಗಿದೆ. ಪ್ರತಿ ವರ್ಷ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಉಟ್ಲು ಪರಿಷೆ ನಡೆಯುತ್ತದೆ. ಸುತ್ತಮುತ್ತಲಿನ ಭಕ್ತಾದಿಗಳು ಜಾತ್ರೆಯಂತೆ ಸೇರಿ ಈ ಸಂಭ್ರಮವನ್ನು ಯಶಸ್ವಿಗೊಳಿಸುತ್ತಾರೆ. ಇದು ಈ ಪ್ರದೇಶದ ಪ್ರಮುಖ ಹಬ್ಬ ಮತ್ತು ಸಾಂಸ್ಕೃತಿಕ ಆಚರಣೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಊರಿನ ಹಿರಿಯರಾದ ಡಾ. ರಾಜಾ ಅವರು, “ನಮ್ಮ ಹಿರಿಯರು ಕಾಲದಿಂದಲೂ ಈ ದೇವರನ್ನು ಪೂಜಿಸಿಕೊಂಡು ಬಂದಿದ್ದಾರೆ. ದೇವಾಲಯದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಈ ವರ್ಷ ಜಂಗಾಲಹಳ್ಳಿ ಗ್ರಾಮದ ಆರ್. ಅಶ್ವತಪ್ಪ ಅವರ ಕುಟುಂಬವು ವಿಶೇಷವಾಗಿ ನವಗ್ರಹ ಮತ್ತು ಶಿಖರ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಅವರೆಲ್ಲರ ಸಹಕಾರದಿಂದಲೇ ಇಂದು ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯವು ಗ್ರಾಮಸ್ಥರ ಸಹಕಾರ, ಭಕ್ತರ ಒಗ್ಗಟ್ಟು ಮತ್ತು ಧಾರ್ಮಿಕ ಭಾವೈಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?