ಇಂಡ್ಲವಾಡಿಯಲ್ಲಿ 75 ಎಕರೆಯಲ್ಲಿ 1650 ಕೋಟಿಗಳ ವೆಚ್ಚದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆ. – ಆನೇಕಲ್ ಬಿ ಶಿವಣ್ಣ ಅಭಿನಂದನೆ.
1 min read

ಬೆಂ,ಆನೇಕಲ್,ಆ,08: ಹಿಂದೆ ಮಾಜಿ ಸಂಸದ ಡಿಕೆ ಸುರೇಶ್ ಶಾಸಕ ಬಿ ಶಿವಣ್ಣರ ಕೋರಿಕೆಯನ್ನು ಪುರಸ್ಕರಿಸಿದ ವಸತಿ ಸಚಿವ ಜಮೀರ್ ಅಹಮದ್ ಸ್ಥಳ ಪತಿಶೀಲನೆ ನಡೆಸಿದ ಪರಿಣಾಮ ಇಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉನ್ನತ ಅಧಿಕಾರಿಗಳ ಸಭೆಯಲ್ಲಿ ಒಪ್ಪಿಗೆ ಸೂಚಿಸುವ ಮುಖಾಂತರ ಆನೇಕಲ್ ಭಾಗಕ್ಕೆ ಸಂತಸ ತಂದಿದ್ದಾರೆ. ಅಲ್ಲದೆ ಕೂಡಲೇ ಕಾಮಗಾರಿಯ ಯೋಜನೆ ಆರಂಭಿಸಲು ಸೂಚಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿಕೆ ಸುರೇಶ್, ಡಿಸಿಎಂ ಡಿಕೆ ಶಿವಕುಮಾರ್, ವಸತಿ ಸಚಿವ ಜಮೀರ್ ಅಹಮದ್ ಮತ್ತು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶಂಕರ್ ಲಿಂಗೇಗೌಡ ರವರಿಗೆ ಆನೇಕಲ್ ಶಾಸಕ ಬಿ ಶಿವಣ್ಣ ಅಭಿನಂದನೆ ಸಲ್ಲಿಸಿದ್ದಾರೆ
![]()


https://shorturl.fm/tG4V5
https://shorturl.fm/cnVmJ