ಕೊಳಚೆ ನೀರು, ಕಸದ ರಾಶಿಯಿಂದ ಬೆಂಬಿಡದ ಸೊಳ್ಳೆ ಕಾಟ..!

1 min read
Share it

 

ಆರೋಗ್ಯವಂತರಾಗಿ ಇರಬೇಕೆಂದರೆ ಮೊದಲು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಆದರೆ ಈ ವಾರ್ಡಿನ ನ ಸ್ಥಳೀಯರ ಗೋಳು ಕೇಳುವವರು ಯಾರು ಇಲ್ಲ ಹೌದು ಆನೇಕಲ್ ತಾಲೂಕಿನ ಚಂದಾಪುರ  ಪುರಸಭೆ ವ್ಯಾಪ್ತಿಯ ಪುರಸಭೆ ಹಿಂಭಾಗದ ವಾರ್ಡ್ನಲ್ಲಿ  ನಿಂತ ನೀರು, ಕಸದ ರಾಶಿ, ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ. ಸುಮಾರು ವರ್ಷದಿಂದ ಈ ಸಮಸ್ಯೆ ಇದೆ ಆದರೆ ಇಲ್ಲಿಯವರೆಗೂ ಯಾರು ಕೂಡ ಇದಕ್ಕೆ ಸರಿಯಾದ ಪರಿಹಾರ ಕಂಡುಹಿಡಿದಿಲ್ಲ,

 

ವರ್ಷ ಕಳೇದರೂ ಪುರಸಭೆ ಹಿಂಭಾಗ ಇರುವ ರಸ್ತೆಯನ್ನು  ಸ್ವಚ್ಛಗೊಳಿಸದೆ ಇರುವ  ಪುರಸಭೆ ಆಡಳಿತದ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಅಸ್ವಚ್ಛತೆಯಿಂದ ರೋಗರುಜಿನಗಳು ಹರಡುವ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ. ತ್ಯಾಜ್ಯ ನೀರು ಹರಿಯುತ್ತಿರುವ ಕಾರಣ ಗಬ್ಬು ನಾರುತ್ತಿದೆ.  ಹುಳಗಳು ತುಂಬಿದ್ರು ಸಂಬಂಧಪಟ್ಟವರು ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬರುತ್ತಾರೆ ಆದರೆ ಇಂಥ ಸಮಸ್ಯೆಗಳು ಇದ್ದ ಸಂದರ್ಭದಲ್ಲಿ ಬರುತ್ತಾರೆ ಹಾಗೆ ಹೋಗುತ್ತಾರೆ ಸಮಸ್ಯೆ ಸರಿಪಡಿಸಿ ಕೊಡುವುದಿಲ್ಲ ಎಂದು ಸ್ಥಳೀಯರು ಸ್ಥಳೀಯ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು .  ಏನೇ ಆಗಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪುರಸಭೆ ಅಧಿಕಾರಿಗಳು ಸ್ಥಳೀಯ ಸದಸ್ಯರುಗಳು ಈ   ವಾರ್ಡ್‌ ಗೆ  ಆಗಮಿಸಿ ಗಬ್ಬು ನಾರುತ್ತಿರುವುದನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದೇ c 24 ಕನ್ನಡ ವಾಹಿನಿಯ ಆಶಯವಾಗಿದೆ. ಒಟ್ಟಾರೆ ಸುದ್ದಿಯಿಂದ ಎಚ್ಚೆತ್ತಾದರೂ  ಸ್ವಚ್ಛತೆಗೆ ಪುರಸಭೆ ಆಡಳಿತ ಮುಂದಾಗುತ್ತಾ ಕಾದುನೋಡಬೇಕಾಗಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?