[t4b-ticker]

ಸಾಲಗಾರರ ಕಿರುಕುಳಕ್ಕೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

1 min read
Share it

ವಿಜಯಪುರ : ಖಾಸಗಿ ಸಾಲಗಾರರ ಕಾಟದಿಂದ ಬೇಸತ್ತು ಯುವಕನೊಬ್ಬ ವಿಡಿಯೋ ಮಾಡಿ ವಿಷ ಕುಡಿದು  ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ತಾಲೂಕಿನ ಕಸಬಾ ಹೋಬಳಿಯ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ.ವಿಜಯಪುರ ನಗರದ ಆದರ್ಶ ನಗರ ಬಡಾವಣೆಯ ನಿವಾಸಿ ಶೋಬಿತ ಬಳ್ಳೂಳಗಿಡದ (24) ಯುವಕ  ಆತ್ಮಹತ್ಯೆಗೆ ಯತ್ನಿಸಿದ್ದು, ಬಡ್ಡಿ ರೂಪದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲ ನೀಡುವಂತೆ  ಶೋಬಿತಗೆ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.

 

ಯುವಕ ಮುಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ, ಸಾಲ ಹೆಚ್ಚಾಗಿ ಮಾಡಿಕೊಂಡ ಕಾರಣ ಯುವಕನ ತಂದೆಗೂ ಸಾಲ ಪಾವತಿಸುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಶೋಭಿತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಖಾಸಗಿ ಆ‌ಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,  ಸಾವು ಬದುಕಿನ ಮಧ್ಯೆ ಯುವಕನ ಹೋರಾಟ ನಡೆಸುತ್ತಿದ್ದಾನೆ.ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?