ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದಿಂದ ಪ್ರಾ,ಕೃ,ಪ,ಸ, ಸಂಘಕ್ಕೆ ಅವಿರೋಧ ಆಯ್ಕೆಯಾದ ಮುಖಂಡರಿಗೆ ಸನ್ಮಾನ
1 min read
ತುರುವೇಕೆರೆ : ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಮುಖಂಡರಿಗೆ ಸನ್ಮಾನಿಸಲಾಯಿತು, ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ/ ಅರೆ ಅಲೆಮಾರಿ ಒಕ್ಕೂಟದ ತಾಲೂಕು ಅಧ್ಯಕ್ಷ ಕೃಷ್ಣಸ್ವಾಮಿ ನೇತೃತ್ವದಲ್ಲಿ ಮಾಯಸಂದ್ರ ಹೋಬಳಿ ವ್ಯಾಪ್ತಿಯ ಬೈತರ ಹೊಸಹಳ್ಳಿ ವೃತ್ತದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ್ ಮತ್ತು ತೊರೆಮಾವಿನಹಳ್ಳಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ದಯಾನಂದ್ ಅವರು ಆಯ್ಕೆಯಾಗಿದ್ದು, ಇವರುಗಳಿಗೆ ಅಲೆಮಾರಿ ಅರೆ ಅಲೆಮಾರಿ ತಾಲೂಕು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು,
ಇದೆ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಗ್ರಯ್ಯ, ಚಿತ್ರದೇವರಹಟ್ಟಿ ಪ್ರಧಾನ ಅರ್ಚಕರಾದ ತಿಮ್ಮಯ್ಯ, ಉಮೇಶ್, ಸತೀಶ್ ಮೂರ್ತಿ, ರಂಗಸ್ವಾಮಿ, ತಾಲೂಕು ಒಕ್ಕೂಟದ ಉಪಾಧ್ಯಕ್ಷರಾದ ಶಾಂತಕುಮಾರ್, ಮಹಾಲಿಂಗಯ್ಯ ಮೂರ್ತಿ, ಕೃಷ್ಣಪ್ಪ, ದೇವರಾಜು, ಭರತ್, ಸ್ವಾಮೀಜಿ, ತಿಮ್ಮೇಗೌಡ, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.
