ಪತ್ನಿ ಟಾರ್ಚರಗೆ ಬೇಸತ್ತು ವ್ಯಕ್ತಿಯೊಬ್ಬ ಪೊಲೀಸ್ ಕಮಿಷನರ್ ಮುಂದೆ ಅಳಲು ತೊಡಿಕೊಂಡು ಕಣ್ಣೀರು
1 min read
ಹುಬ್ಬಳ್ಳಿ : ಪತ್ನಿ ಟಾರ್ಚರಗೆ ಬೇಸತ್ತು ವ್ಯಕ್ತಿಯೊಬ್ಬ ಹುಬ್ಬಳ್ಳಿ ಧಾರವಾಡ ಪೊಲೀಸ ಕಮಿಷನರ್ ಮುಂದೆ ಅಳಲು ತೊಡಿಕೊಂಡು ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ಸಬ ಅರ್ಬನ್ ಠಾಣೆಯ ಮುಂಭಾಗದಲ್ಲಿ ಸೋಮುವಾರ ನಡೆದಿದೆ.
ಬೇರೊಂದು ವಿಚಾರಕ್ಕೆ ಮಾಧ್ಯಮಗೋಷ್ಠಿ ನಡೆಸಲು ಕಮಿಷನರ್ ಎನ್ ಶಶಿಕುಮಾರವರು ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ ಠಾಣೆಗೆ ಬಂದ ವೇಳೆ ಈ ಘಟನೆ ನಡೆದಿದ್ದು, ಸರ್ ನನ್ನ ಹೆಂಡತಿ, ಅವರ ಮನೆಯವರು ತುಂಬಾ ಟಾರ್ಚರ್ ಮಾಡ್ತಾರೆ. ನೀವು ಏನಾದರೂ ಸಹಾಯ ಮಾಡಿ ಎಂದು ಹೆಂಡತಿ ಕಾಟ ತಾಳಲಾರದೆ ಪೊಲೀಸ್ ಕಮಿಷನರ್ ಮುಂದೆ ಕಣ್ಣೀರು ಹಾಕಿದ ಪತಿ ತನ್ನ ಅಳಲು ತೊಡಿಕೊಂಡಿದ್ದಾನೆ. ಅಲ್ಲದೆ ರೌಡಿಗಳಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಕಮೀಷನರ್ ಮುಂದೆ ಅಳಲನ್ನು ತೋಡಿಕೊಂಡಾಗ ಆ ಯುವಕನನ್ನು ಕಮಿಷನರ್ರವರು ಸಮಾಧಾನ ಮಾಡಿ ಕಳುಹಿಸಿದ್ದಾರೆ.
