ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ನಾಮಪತ್ರ ಸಲ್ಲಿಕೆ
1 min read
ಕೋಲಾರ : ಮೇ 28ರಂದು ನಡೆಯುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಎರಡನೇ ದಿನವಾದ ಸೋಮವಾರ ಉಮೇದವಾದರ ಮಹಾ ಪೂರ್ವವೇ ಹರಿತಿದೆ. ಮೊದಲ ದಿನವಾದ ಭಾನುವಾರ ಶಾಸಕಿ ರೂಪಕಲಾ ಶಶಿಧರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಯಹಳ್ಳಿ ಗೋವಿಂದ ಗೌಡ, ಗುಡಿಬಂಡೆ ಮಂಜುನಾಥ್ ರೆಡ್ಡಿ, ಸೇರಿದಂತೆ ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದರು. ಸೋಮವಾರ 32 ಮಂದಿ ಒಟ್ಟು 44 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಇದರಿಂದ ಇದುವರೆಗೂ 48 ಅರ್ಜಿ ಅರ್ಜಿಗಳು ಸಲ್ಲಿಸಲ್ಪಟ್ಟಂತಾಗಿದೆ. ಸೋಮವಾರ ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಸಹ ಡಿಸಿಸಿ ಬ್ಯಾಂಕಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಬಾಗೆಪಲ್ಲಿ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಆಯ್ಕೆ ಬಯಸಿ ಸುಬ್ಬಾರೆಡ್ಡಿ ಚಿನಕಾಯಲಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಬೆಂಬಲಿಗರೊಂದಿಗೆ ಚುನಾವಣೆ ಅಧಿಕಾರಿಯ ಕಛೇರಿಗೆ ತೆರಳಿ ಕೋಲಾರ – ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿಯವರು ನಾಮಪತ್ರವನ್ನು ಸಲ್ಲಿಕೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ನಿಂದ ಬಡಬಗ್ಗರಿಗೆ ಸಿಗುವಂತಹ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ .ಆದ್ದರಿಂದ ನಮ್ಮ ಸರ್ಕಾರದಲ್ಲಿ ಮಾತನಾಡಿ ಬಡವರಿಗೆ ಈ ಬ್ಯಾಂಕ್ ನಿಂದ ಹೆಚ್ಚಿನ ಸಾಲಗಳನ್ನು ನೀಡಿ ಬ್ಯಾಂಕ್ ನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡ ಬೇಕಾಗಿರುವುದರಿಂದ ನಾನು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದೇನೆ . ಒಂದು ವರ್ಷದಿಂದ ಬ್ಯಾಂಕ್ ಸರಿಯಾಗಿ ನಡೆಯುತ್ತಿಲ್ಲ .ಜನಪ್ರತಿನಿಧಿಗಳು ಇದ್ದರೇ ಮಾತ್ರ ಜನರಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸಾಧ್ಯ ಎಂದು ತಿಳಿಸಿದರು.
ವರದಿ:-ಸತೀಶ್ ಬಾಬು
ಗುಡಿಬಂಡೆ ತಾಲೂಕು
