[t4b-ticker]

ಬೆನ್ನು ನೋವು ಅಂತಾ ನೆಪ ಹೇಳಿ ಕೋರ್ಟ್​ಗೆ ದರ್ಶನ್ ಬಂಕ್!ಬೆನ್ನು ನೋವಿದ್ರೂ ಆಪ್ತ ಧನ್ವೀರ್​ ಸಿನಿಮಾ ನೋಡಿದ ದಾಸ!

1 min read
Share it

ಬೆಂಗಳೂರು : ನಟ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಗೆಳೆಯನ ಸಿನಿಮಾ ದರ್ಶನ್ ಸಾಥ್ ನೀಡಿದ್ದು, ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ರು. ಆದ್ರೆ ಮೊನ್ನೆ ಕೋರ್ಟ್​ಗೆ ಹಾಜರಾಗದ ದರ್ಶನ್​ ನಿನ್ನೆ ಸಿನಿಮಾ ನೋಡಲು ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.  ದರ್ಶನ್ ಮತ್ತು ಸಂಗಡಿಗರ ವಿರುದ್ಧ ಗಂಭೀರ ಆರೋಪ ಇದೆ. ರೇಣುಕಾಸ್ವಾಮಿ ಕೇಸ್ ಸಂಬಂಧ ಏಪ್ರಿಲ್​ 8 ರಂದು ಕೋರ್ಟ್​ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಕೋರ್ಟ್​ಗೆ ಹಾಜರಾಗದ ನಟ ದರ್ಶನ್, ನಿನ್ನೆ ಪ್ರಾಣ ಸ್ನೇಹಿತನ ಸಿನಿಮಾ ನೋಡಕ್ಕೆ ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

 

ಕೊಲೆ ಕೇಸ್​ನಲ್ಲಿ ಬೆಂಗಳೂರು ನಗರ ಸಿಸಿಎಚ್ 57ನೇ ನ್ಯಾಯಾಲಯ​ ಡೇಟ್​ ಕೊಟ್ಟಿತ್ತು. ಆ ದಿನ ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿ ಪವಿತ್ರಾ ಗೌಡ ಸೇರಿ ಇತರೆ 16 ಹಾಜರಾಗಿದ್ರು. ಈ ಕೇಸ್​ನ ಎ2 ಆರೋಪಿ ನಟ ದರ್ಶನ್​ ಮಾತ್ರ ಬಂದಿರಲಿಲ್ಲ.. ಶೂಟಿಂಗ್ ಒತ್ತಡ.. ಬೆನ್ನು ನೋವು.. ಅಂತಾ ನೆಪ ಹೇಳಿದರು..  ನಟ ದರ್ಶನ್‌ ಗೈರನ್ನ ಗಮನಿಸಿದ ನ್ಯಾಯಾಧೀಶರು ದರ್ಶನ್ ವಕೀಲರಿಗೆ ಎಚ್ಚರಿಕೆ ನೀಡಿದರು..  ಪ್ರಕರಣದ ವಿಚಾರಣೆ ಇದ್ದ ದಿನ ಕೋರ್ಟ್‌ಗೆ ಹಾಜರಾಗಬೇಕು ಅಂತಾ ಗರಂ ಆಗಿ ಹೇಳಿದರು.

 

ಮೊನ್ನೆ ಕೋರ್ಟ್​ಗೆ ಹಾಜರಾಗದ ದರ್ಶನ್, ನಿನ್ನೆ ಸೆಲೆಬ್ರಿಟಿಗಳಿಗೆ ಅಂತಾನೇ ಆಯೋಜಿಸಿದ್ದ ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಹಾಜರಿ ಹಾಕಿದ್ದಾರೆ. ಇದು ದರ್ಶನ್​ ಪ್ರಾಣ ಸ್ನೇಹಿತ ಧನ್ವೀರ್ ನಟನೆಯ ಸಿನಿಮಾ. ಆದ್ದರಿಂದ ದಾಸ ಸಪೋರ್ಟ್ ಮಾಡಲು ಬಂದಿದ್ದರು. ಇನ್ನು ಬೆಂಗಳೂರಿನ ಖಾಸಗಿ ಮಾಲ್​ನಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು, ದರ್ಶನ್ ಅವರು ಬಂದ ಕೂಡಲೇ ಅಭಿಮಾನಿಗಳು ಮುತ್ತಿಕೊಂಡ್ರು. ಡಿ ಬಾಸ್ ಎಂದು ಜೈಕಾರ ಕೂಗಲು ಆರಂಭಿಸಿದ್ರು. ಕುಂಟುತ್ತಲೇ ಸಾಗಿದ ದರ್ಶನ್, ಚಿತ್ರತಂಡದ ಜೊತೆ ಕುಳಿತು ವಾಮನ ಸಿನಿಮಾ ನೋಡಿದರು..

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?