ಭಾರತಕ್ಕೆ ಜಾಕ್ಪಾಟ್ .. ಒಂದಲ್ಲ.. ಎರಡಲ್ಲ.. ಏಳು ಕಡೆ ಬಂಗಾರದ ಭಂಡಾರವೇ ಪತ್ತೆ..!
1 min read
ಚಿನ್ನ.. ಚಿನ್ನ.. ಚಿನ್ನ.. ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕೆಲ ದಿನಗಳ ಹಿಂದೆ ಇದೇ ಚಿನ್ನದ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಇಡೀ ದೇಶದಲ್ಲಿ ಸಖತ್ ಸೌಂಡ್ ಮಾಡಿತ್ತು. ಆದ್ರೀಗ ಚಿನ್ನದ ವಿಚಾರದಲ್ಲಿ ಭಾರತಕ್ಕೆ ಜಾಕ್ಪಾಟ್ ಹೊಡೆದಿದೆ. ಒಂದಲ್ಲ.. ಎರಡಲ್ಲ.. ಏಳು ಕಡೆ ಬಂಗಾರದ ಭಂಡಾರವೇ ಪತ್ತೆಯಾಗಿದೆ.ಭಾರತಕ್ಕೆ ಸದ್ಯ ಒಂದು ಜಾಕ್ಪಾಟ್ ಹೊಡೆದಿದೆ. ದೇಶದ ಇದೊಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಇರೋದು ಪತ್ತೆಯಾಗಿದೆ. ಅದು ಕೂಡ ಒಂದೇ ಜಾಗದಲ್ಲಿ ಅಲ್ಲ. ಹಾಗಾದ್ರೆ ಯಾವುದು ಆ ರಾಜ್ಯ, ಎಷ್ಟು ಕಡೆ ನಿಕ್ಷೇಪ ಪತ್ತೆಯಾಗಿದೆ.
ಕಳಿಂಗರ ನಾಡು ಒಡಿಶಾದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೇವಲ ಒಂದು ಕಡೆ ಮಾತ್ರವಲ್ಲದೇ ಒಡಿಶಾದ 7 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಭಾರತದ ಚಿನ್ನದ ಗಣಿಗಾರಿಕೆ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ. ಚಿನ್ನದ ನಿಕ್ಷೇಪದ ಬಗ್ಗೆ ಖುದ್ದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್ ಮಾಹಿತಿ ಹಂಚಿಕೊಂಡಿದ್ದಾರೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಒಟ್ಟು ರಾಜ್ಯ ಏಳು ಕಡೆ ಚಿನ್ನದ ನಿಕ್ಷೇಪವನ್ನ ಪತ್ತೆ ಹಚ್ಚಿದೆ. ಇದು ಒಡಿಶಾವನ್ನ ಭಾರತದ ಅತಿದೊಡ್ಡ ಚಿನ್ನದ ನಿಕ್ಷೇಪವಿರುವ ರಾಜ್ಯವೆಂದು ಗುರುತಿಸಿಕೊಳ್ಳಲಿದೆ ಅಂತ ಹೇಳಿದ್ದಾರೆ.ಎಲ್ಲೆಲ್ಲಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಅಂತ ಹೇಳೋದಾದ್ರೆ, ಒಡಿಶಾದ ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್, ಬಾದಂಪಹರ್ನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಚಿನ್ನದ ನಿಕ್ಷೇಪಗಳನ್ನ ಪತ್ತೆ ಹಚ್ಚಿದೆ.
ಒಡಿಶಾದಲ್ಲಿ ಕೇವಲ ಚಿನ್ನದ ನಿಕ್ಷೇಪಗಳು ಮಾತ್ರವಲ್ಲದೇ, ಅದಾಸಾ-ರಾಂಪಲ್ಲಿ ಪ್ರದೇಶಗಳಲ್ಲಿ ಅಪಾರ ತಾಮ್ರದ ನಿಕ್ಷೇಪ ಇರುವುದು ಕೂಡ ಪತ್ತೆಯಾಗಿದೆ. ಈಗಾಗಲೇ ಕಿಯೋಂಜಾರ್ ಜಿಲ್ಲೆಯಲ್ಲಿ ಚಿನ್ನ ನಿಕ್ಷೇಪಗಳನ್ನ ಪತ್ತೆ ಹಚ್ಚಲಾಗಿದ್ದು, ಚಿನ್ನ ಸಿಗೋದು ಕನ್ಫರ್ಮ್ ಆಗ್ತಿದ್ದಂತೆ ಒಡಿಶಾ ಸರ್ಕಾರ ಗೊಲ್ಡ್ ಮೈನಿಂಗ್ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.ಸದ್ಯ ಕರ್ನಾಟಕದ ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿ ಮಾತ್ರ ಚಿನ್ನ ಉತ್ಪಾದನೆಯಾಗುತ್ತಿದೆ. ಮುಂದೆ ಒಡಿಶಾದಲ್ಲೂ ಚಿನ್ನದ ಗಣಿ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಇದ್ರಿಂದ ದೇಶಕ್ಕೆ ಉತ್ತಮ ಆದಾಯ ಸಿಗುವುದರಲ್ಲಿ ಡೌಟ್ ಇಲ್ಲ..
