ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ.. 4 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ
1 min read
ಐಸಿಸಿ ಚಾಂಪಿಯನ್ಸ್ ಟ್ರೋಫಿ ೨೦೨೫ ರ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ೪ ವಿಕೆಟ್ಗಳಿಂದ ಗೆದ್ದು ಬೀಗುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ೨೫೨ ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ೪೯ ಓವರ್ನಲ್ಲೇ ೬ ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
ಫೈನಲ್ ಪಂದ್ಯದ ಗೆಲುವಿಗೆ ಟೀಮ್ ಇಂಡಿಯಾಗೆ ಆನೇಕ ಆಟಗಾರರು ಕೊಡುಗೆ ನೀಡಿದರು. ಈ ಪೈಕಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೂವರು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ. ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೊದಲ ಪ್ಲೇಯರ್ ಕ್ಯಾಪ್ಟನ್ ರೋಹಿತ್ ಶರ್ಮಾ. ಇವರು ೮೩ ಎಸೆತಗಳಲ್ಲಿ ೭ ಬೌಂಡರಿ ಮತ್ತು ೩ ಸಿಕ್ಸರ್ ನೆರವಿನಿಂದ ೭೬ ರನ್ ಬಾರಿಸಿದರು. ರೋಹಿತ್ ನೀಡಿದ ಉತ್ತಮ ಆರಂಭದಿಂದಲೇ ಭಾರತ ಗೆಲ್ಲಲು ಸಾಧ್ಯವಾಗಿದ್ದು. ಚಾಂಪಿಯನ್ಸ್ ಟ್ರೋಫಿ ೨೦೨ರಲ್ಲಿ ಭಾರತ ತಂಡದ ಪರ ಸ್ಥಿರ ಪ್ರದರ್ಶನ ನೀಡಿದವರು ಶ್ರೇಯಸ್ ಅಯ್ಯರ್. ಫೈನಲ್ ಪಂದ್ಯದಲ್ಲೂ ಅಯ್ಯರ್ ತಮ್ಮ ಅದ್ಭುತ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಅಯ್ಯರ್ ೬೨ ಎಸೆತಗಳಲ್ಲಿ ೨ ಬೌಂಡಿರಿ ಮತ್ತು ೨ ಸಿಕ್ಸರ್ ನೆರವಿನಿಂದ ೪೮ ರನ್ಗಳನ್ನು ಕಲೆ ಹಾಕಿದರು. ಕುಲ್ದೀಪ್ ಯಾದವ್ ತನ್ನ ಸ್ಪಿನ್ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ಬ್ಯಾಟರ್ಸ್ ಅನ್ನು ಕಟ್ಟಿ ಹಾಕಿದರು. ರಚಿನ್ ರವೀಂದ್ರ ಮತ್ತು ಕೇನ್ಸ್ ವಿಲಿಯಮ್ಸನ್ ವಿಕೆಟ್ ತೆಗೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ತಮ್ಮ ೧೦ ಓವರ್ಗಳಲ್ಲಿ ನೀಡಿದ್ದು ಕೇವಲ ೪೦ ರನ್.
